ಏಪ್ರಿಲ್ 7 ರಂದು ಉಡುಪಿಯ ಶ್ರೀ ರಾಮ್ ಜಾನಪದ ಕಲಾ ತಂಡದವರಿಂದ ‘ಜಾನಪದ ವೈಭವ’
ಕನ್ನಡ ನಾಡು
ಉಡುಪಿ : ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನ ಅಂಬಲಪಾಡಿ ಇದರ ಆಶ್ರಯದಲ್ಲಿ ಕರ್ನಾಟಕ ಜಾನಪದ ಪರಿಷತ್ತು (ರಿ.) ಉಡುಪಿ ಜಿಲ್ಲೆ ಮತ್ತು ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ (ರಿ.) ಇವರ ಸಹಯೋಗದಲ್ಲಿ ಉಡುಪಿಯ ಶ್ರೀ ರಾಮ್ ಜಾನಪದ ಕಲಾ ತಂಡದವರಿಂದ ‘ಜಾನಪದ ವೈಭವ’ವು ಅಂಬಲಪಾಡಿ ದೇವಸ್ಥಾನದ ಶ್ರೀ ಜನಾರ್ದನ ಬಯಲು ರಂಗ ಮಂದಿರದಲ್ಲಿ ದಿನಾಂಕ 07-04-2024ರಂದು ಸಂಜೆ 6 ಗಂಟೆಗೆ ನಡೆಯಲಿದೆ.