ಎಪ್ರಿಲ್ ೦೪ - ೨೦೨೪ರ ಮುಸ್ಸಂಜೆ
04 Apr, 2024
ಬೆಂಗಳೂರಿನಲ್ಲಿ ಕಾವೇರಿ ಆಸ್ಪತ್ರೆಯ ಎರಡನೇ ಶಾಖೆ ಉದ್ಘಾಟನೆ

ಬೆಂಗಳೂರು, ಕರ್ನಾಟಕ: ಆರೋಗ್ಯ ಕ್ಷೇತ್ರದಲ್ಲಿ ಮುಂಚೂಣಿ ಸಂಸ್ಥೆಯಾಗಿದ್ದು, ರೋಗಿಗಳ ಕೇಂದ್ರಿತ ಆರೈಕೆಯಲ್ಲಿ ಹೆಸರು ಗಳಿಸಿರುವ ಕಾವೇರಿ ಆಸ್ಪತ್ರೆಯು ಬೆಂಗಳೂರಿನಲ್ಲಿ ತನ್ನ ಎರಡನೇ ಆಸ್ಪತ್ರೆಯನ್ನು ಆರಂಭಿಸುತ್ತಿದೆ.
ಮಾರತಹಳ್ಳಿಯಲ್ಲಿ ಏಪ್ರಿಲ್ 6ರಂದು ಬೆಳಗ್ಗೆ 9 ಗಂಟೆಗೆ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಆಸ್ಪತ್ರೆಯನ್ನು ಉದ್ಘಾಟಿಸಲಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ ಅವರು ಹಾಗೂ ಮತ್ತಿತರ ಗಣ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವುದು ನಮಗೆ ಸಂತೋಷವಾಗಿದೆ.
ದಕ್ಷಿಣ ಭಾರತದಲ್ಲಿ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಎರಡನೇ ಆಸ್ಪತ್ರೆಯನ್ನು ಆರಂಭಿಸುವ ಮೂಲಕ ಕಾವೇರಿ ಆಸ್ಪತ್ರೆಯ ವಿಸ್ತರಣೆಯು ಆರೋಗ್ಯ ಕ್ಷೇತ್ರದಲ್ಲಿ ಒಂದು ಮಹತ್ವದ ಮೈಲುಗಲ್ಲಾಗಿದೆ. ಬೆಂಗಳೂರಿನ ಜನರಿಗೆ ಸಹಾನುಭೂತಿಯ ವೈದ್ಯಕೀಯ ಸೇವೆ ಮತ್ತು ಆರೈಕೆ ನೀಡುವುದಕ್ಕೆ ಕಾವೇರಿ ಆಸ್ಪತ್ರೆ ಬದ್ಧವಾಗಿದೆ.
ಜಾಗತಿಕ ಮಟ್ಟದ ಆರೋಗ್ಯಸೇವಾ ಮೂಲಸೌಕರ್ಯಗಳೊಂದಿಗೆ ಸೇವೆ ನೀಡುವ ನೀಡುವ ನಿಟ್ಟಿನಲ್ಲಿ ಕಾವೇರಿ ಆಸ್ಪತ್ರೆಯ ಪ್ರಯತ್ನವು ನಿರಂತರವಾಗಿ ಮುಂದುವರೆದಿದೆ. ದಕ್ಷಿಣ ಭಾರತದಲ್ಲಿ ಕಾವೇರಿಯ ಆಸ್ಪತ್ರೆಯು 16 ಆಸ್ಪತ್ರೆಗಳ ಜಾಲವನ್ನು ಹೊಂದಿರುವುದು ಕೂಡ ಮೈಲುಗಲ್ಲು ಆಗಿದೆ. ಆಸ್ಪತ್ರೆಯು ರೋಗಿಗಳ ಯೋಗಕ್ಷೇಮ ಮತ್ತು ಕ್ಲಿನಿಕಲ್ ನಾವೀನ್ಯತೆಯಲ್ಲಿ ಮುಂಚೂಣಿಯತ್ತಾ ಸಾಗುತ್ತಿದೆ.
ಮಾರತಹಳ್ಳಿಯಲ್ಲಿ ಕಾವೇರಿ ಆಸ್ಪತ್ರೆಯ ಉದ್ಘಾಟನೆಗೆ ಎಲ್ಲ ಮಾಧ್ಯಮ ಸ್ನೇಹಿತರಿಗೆ ಆತ್ಮೀಯವಾಗಿ ಸ್ವಾಗತಿಸುತ್ತಿದ್ದೇವೆ. ಬೆಂಗಳೂರಿನ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಮಹತ್ವದ ಘಟನೆಗೆ ತಾವೆಲ್ಲ ಸಾಕ್ಷಿಯಾಗಬೇಕು. ತಮ್ಮ ಮಾಧ್ಯಮದಲ್ಲಿ ಸುದ್ದಿಯನ್ನು ಪ್ರಕಟಿಸುವ ಮೂಲಕ ಈ ಕುರಿತು ಜಾಗೃತಿ ಮೂಡಿಸುತ್ತೀರೆಂದು ನಂಬಿದ್ದೇವೆ.
***************************************************************************************************************************************
“ಡಾ. ಬಾಬು ಜಗಜೀವನ ರಾಂ”ರವರ 117ನೇ ಜನ್ಮದಿನಚರಣೆ

ಬೆಂಗಳೂರು : ಸರ್ಕಾರದ ವತಿಯಿಂದ 2024-25ನೇ ಸಾಲಿನಲ್ಲಿ ಡಾ. ಬಾಬು ಜಗಜೀವನರಾಂ ರವರ 117ನೇ ಜನ್ಮದಿನಾಚರಣೆಯನ್ನು ಏಪ್ರಿಲ್ 05 ರಂದು ಬೆಳಿಗ್ಗೆ 10.00 ಗಂಟೆಗೆ ವಿಧಾನಸೌಧದ ಪಶ್ಚಿಮ ದ್ವಾರದಲ್ಲಿರುವ ಡಾ. ಬಾಬು ಜಗಜೀವನರಾಂ ರವರ ಪ್ರತಿಮೆ ಬಳಿ ಮಾಲಾರ್ಪಣೆ ಮಾಡುವ ಮುಖಾಂತರ ಆಚರಿಸಲಾಗುತ್ತಿದೆ.
ಕಾರ್ಯಕ್ರಮವನ್ನು ಲೋಕಸಭಾ ಸಾರ್ವತ್ರಿಕ ಚುನಾವಣೆ – 2024ರ ಹಿನ್ನೆಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಆಚರಿಸಲಾಗುತ್ತಿದ್ದು, ಕಾರ್ಯಕ್ರಮದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಸಮಾಚ ಕಲ್ಯಾಣ ಇಲಾಖೆ ಸಚಿವರು ಮತ್ತು ಇತರೆ ಗಣ್ಯ ವ್ಯಕ್ತಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
********************************************************************************************************************
ರಾಷ್ಟ್ರೀಯ ಲೋಕ್-ಅದಾಲತ್

ಬೆಂಗಳೂರು : 2024ನೇ ಜುಲೈ 13 ರಂದು ರಾಜ್ಯಾದ್ಯಂತ ರಾಷ್ಟ್ರೀಯ ಲೋಕ್ ಅದಾಲತ್ ಹಮ್ಮಿಕೊಳ್ಳಲಾಗಿದ್ದು, ಸದರಿ ಲೋಕ್ ಅದಾಲತ್ನಲ್ಲಿ ಸಾರ್ವಜನಿಕರು ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಇಚ್ಛಿಸಿದಲ್ಲಿ ಮುಂಚಿತವಾಗಿ ಸಂಬಂಧಪಟ್ಟ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು.
ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಪ್ರಕರಣ ನಡೆಯುತ್ತಿರುವ ನ್ಯಾಯಾಲಯಕ್ಕೆ ಪ್ರಕರಣ ರಾಜೀ ಮಾಡಿಕೊಳ್ಳುವ ಕುರಿತು ತಿಳಿಸುವ ಮೂಲಕ ಅಥವಾ ಅರ್ಜಿ ಸಲ್ಲಿಸುವ ಮೂಲಕ ಪ್ರಕರಣ ಇತ್ಯರ್ಥಪಡಿಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಜಾಲತಾಣ www.kslsa.kar.nic.in ಅಥವಾ ಸಹಾಯವಾಣಿ ಸಂಖ್ಯೆ 15100 ಅಥವಾ ನಿಮ್ಮ ಹತ್ತಿರದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳು ಅಥವಾ ತಾಲ್ಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಯವರನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
*************************************************************************************************************
ನಕಲಿ ಕಾವೇರಿ ಬಗ್ಗೆ ಎಚ್ಚರ: ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ

ಬೆಂಗಳೂರು : ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ಕರ್ನಾಟಕ ಸರ್ಕಾರದ ಉದ್ದಿಮೆ, ರಾಜ್ಯದ ಸಾವಿರಾರು ಕುಶಲಕರ್ಮಿಗಳ ಬೆನ್ನೆಲುಬಾಗಿ ಕರಕುಶಲ ಕಲೆಗಳ ಮೇಲೆ ಅವಲಂಬಿತರಾಗಿರುವ ಕರಕುಶಲಕರ್ಮಿಗಳ ಹಾಗೂ ಅವರ ಕುಟುಂಬದ ಶ್ರೆಯೋಭಿವೃದ್ಧಿಗೆ ಶ್ರಮಿಸುತ್ತಿದೆ. ಕರಕುಶಲ ವಲಯಕ್ಕೆ ಪೂರಕ ವಾತಾವರಣ ಸೃಷ್ಠಿಸಿ ಕರಕುಶಲಕರ್ಮಿಗಳು ತಯಾರಿಸಿದ ಉತ್ಪನ್ನಗಳಿಗೆ ರಾಜ್ಯಾದ್ಯಂತ ತನ್ನ ವಿಶ್ವವಿಖ್ಯಾತ 12 ‘ಕಾವೇರಿ’ ಆಟ್ರ್ಸ್ ಮತ್ತು ಕ್ರಾಫ್ಟ್ ಎಂಪೋರಿಯಂ ಮೂಲಕ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದೆ.
ಸುಮಾರು 1 ಶತಮಾನದಿಂದ ಅಸ್ತಿತ್ವದಲ್ಲಿರುವ ನಿಗಮದ ಫ್ಲಾಗ್ಶಿಪ್ ಕಾವೇರಿ ಮಾರಾಟ ಮಳಿಗೆಯು ಬೆಂಗಳೂರಿನ ಮಹಾತ್ಮಗಾಂಧಿ ರಸ್ತೆಯಲ್ಲದೆ ಬೆಂಗಳೂರು ನಗರದ ಪ್ರಮುಖ ಸ್ಥಳದಲ್ಲಿ ಇದು ಕಾರ್ಯನಿರ್ವಹಿಸುತ್ತಿದೆ. ಬೆಂಗಳೂರಿಗೆ ಭೇಟಿ ನೀಡುವ ದೇಶ ವಿದೇಶದ ಪ್ರಮುಖರು, ಗಣ್ಯರು ಸದರಿ ಮಳಿಗೆಗೆ ಭೇಟಿ ನೀಡುತ್ತಾರೆ. ಇದಕ್ಕೆ ಪ್ರಮುಖ ಕಾರಣ ರಾಜ್ಯದ ಪಾರಂಪರಿಕೆ ಮತ್ತು ವಿವಿಧ ಕರಕುಶಲ ಕಲೆಗಳ ಉತ್ಕøಷ್ಟ ಉತ್ಪನ್ನಗಳು ನ್ಯಾಯಯುತ ಬೆಲೆಗೆ ಕಾವೇರಿ ಮಳಿಗೆಯಲ್ಲಿ ದೊರೆಯುತ್ತವೆ. ಈ ಪ್ರತಿಷ್ಠಿತ ಬ್ರಾಂಡ್ ಲೋಗೊ ಮತ್ತು ಶೈಲಿಯನ್ನು ಸೂಕ್ಷ್ಮವಾಗಿ ಮಾರ್ಪಾಡು ಮಾಡಿ ಅನೇಕ ಖಾಸಗಿ ಮಳಿಗೆಗಳು ಜನಸಾಮಾನ್ಯರಿಗೆ ವಂಚಿಸುತ್ತಿರುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಿದೆ. ಈ ಬ್ರಾಂಡ್ ಹೆಸರನ್ನು ದುರುಪಯೋಗಪಡಿಸಿಕೊಂಡು ಕಳಪೆ ಕರಕುಶಲ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಮಳಿಗೆಗಳಲ್ಲಿ ಉತ್ಪನ್ನ ಖರೀದಿಸಿರುವ ಗ್ರಹಾಕರಿಂದ ನಿಗಮಕ್ಕೆ ಹಲವಾರು ದೂರುಗಳು ಬರುತ್ತಿವೆ.
ಹೆಚ್ಚುತ್ತಿರವ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಕರಕುಶಲ ಸಬಲೀಕರಣ ಮತ್ತು ಸಂರಕ್ಷಣೆಗಾಗಿ ಹಾಗೂ ಪಾರಂಪರಿಕ ಕರಕುಶಲ ಕಲೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಶ್ರಮಿಸುತ್ತಿರುವ ನಿಗಮದ ಬಗ್ಗೆ ಹಾಗೂ ಕಾವೇರಿ ಗ್ರಾಹಕರನ್ನು ದಾರಿ ತಪ್ಪಿಸುತ್ತಿರುವ ನಕಲಿ ಮಳಿಗೆಗಳ ಜನಸಮಾನ್ಯರ ಬಗ್ಗೆ ಅರಿವು ಮೂಡಿಸುವುದು ಅವಶ್ಯಕ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಜಿ.ವಿಶ್ವನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
************************************************************************************
ಬೆಂಗಳೂರು ಜಲಮಂಡಳಿಯಿಂದ ಪೋನ್ ಇನ್ ಕಾರ್ಯಕ್ರಮ

ಬೆಂಗಳೂರು : ಬೆಂಗಳೂರು ಜಲಮಂಡಳಿಯ ವತಿಯಿಂದ ಏಪ್ರಿಲ್ 05, 2024ರ ಶುಕ್ರವಾರ ಬೆಳಿಗ್ಗೆ 9.30 ಗಂಟೆಯಿಂದ 10.30 ಗಂಟೆಯ ವರೆಗೆ ನೇರ ಪೋನ್ ಇನ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಸಾರ್ವಜನಿಕರು ತಮ್ಮ ವಲಯ / ಪ್ರದೇಶಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ಮತ್ತು ಒಳ ಚರಂಡಿ, ಕೊಳವೆ, ಇಳಿ ಗುಂಡಿಯಿಂದ ತ್ಯಾಜ್ಯ ನೀರು ಹೊರಬರುತ್ತಿರುವ ಬಗ್ಗೆ ಜಲಮಾಪನ ಹಾಗೂ ನೀರಿನ ಬಿಲ್ಲಿನಲ್ಲಿ ಸಮಸ್ಯೆಯ ಬಗ್ಗೆ ನೇರವಾಗಿ ಮಾತನಾಡಿ ಕುಂದು – ಕೊರತೆಗಳನ್ನು ಬಗೆಹರಿಸಿಕೊಳ್ಳಲು ಈ ಪೋನ್ ಇನ್ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಳ್ಳುವುದು. ನೀರಿನ ಸಂಪರ್ಕ ಹೊಂದಿರುವ ಗ್ರಾಹಕರು ತಮ್ಮ ಆರ್.ಆರ್. ಸಂಖ್ಯೆಯನ್ನು ತಿಳಿಸಿ ದೂರನ್ನು ನೀಡುವುದು. ಸಾರ್ವಜನಿಕರು ದೂರವಾಣಿ ಸಂಖ್ಯೆ 080-22945119 ನ್ನು ಸಂಪರ್ಕಿಸಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
******************************************************************************
ಸಾಗರೋತ್ತರ ನೇಮಕಾತಿಗಾಗಿ ಏಜೆಂಟ್ಗಳಿಂದ ಅಧಿಕ ಶುಲ್ಕ ವಿಧಿಸುವಿಕೆ, ನಕಲಿ ಸಾಗರೋತ್ತರ ಉದ್ಯೋಗಗಳನ್ನು ನೀಡುವಿಕೆ ಮತ್ತು ಅಕ್ರಮ ನೇಮಕಾತಿ ಕುರಿತು ಎಚ್ಚರಿಕೆ

ಬೆಂಗಳೂರು : ನೋಂದಣಿಯಾಗದ ನೇಮಕಾತಿ ಏಜೆಂಟರು ಒದಗಿಸುವ ನಕಲಿ ಉದ್ಯೋಗದ ಕೊಡುಗೆಗಳಿಂದ ವಂಚನೆಗೆ ಒಳಗಾಗುವ ವಿದೇಶಿ ಉದ್ಯೋಗಾಕಾಂಕ್ಷಿಗಳ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ ಮತ್ತು ಹೆಚ್ಚುವರಿಯಾಗಿ ರೂ.2 ಲಕ್ಷದಿಂದ ರಿಂದ 5 ಲಕ್ಷಗಳವರೆಗೆ ಶುಲ್ಕ ವಿಧಿಸುವುದು ಕೂಡಾ ಕಂಡು ಬಂದಿದೆ. ಈ ನೋಂದಾಯಿಸದ / ಅಕ್ರಮ ಏಜೆಂಟ್ಗಳು ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಪರವಾನಗಿ ಪಡೆಯದೆ ಕಾರ್ಯನಿರ್ವಹಿಸುತ್ತಿರುತ್ತಾರೆ, ವಿದೇಶದಲ್ಲಿ ಕೆಲಸ ಮಾಡಲು ನೇಮಕಾತಿ ಮಾಡುವುದಕ್ಕೆ ಏಜೆನ್ಸಿಗಳು ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಪರವಾನಗಿ ಪಡೆಯುವುದು ಕಡ್ಡಾಯವಾಗಿದೆ. ಆದರೆ ಹಲವು ಅಕ್ರಮ ಏಜೆಂಟ್ಗಳು ಫೇಸ್ಬುಕ್, ವಾಟ್ಸಾಪ್, ಟೆಕ್ಸ್ಟ್ ಮೆಸೇಜ್ ಮತ್ತು ಇತರ ಮಾಧ್ಯಮಗಳ ಮೂಲಕ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಈ ಏಜೆನ್ಸಿಗಳು ಅವರ ಇರುವಿಕೆ ಮತ್ತು ಅವರನ್ನು ಸಂಪರ್ಕಿಸುವ ಬಗ್ಗೆ ಬಹಳ ಕಡಿಮೆ ವಿವರಗಳನ್ನು ಒದಗಿಸುತ್ತವೆ ಅಥವಾ ಯಾವುದೇ ವಿವರಗಳನ್ನು ಒದಗಿಸುವುದಿಲ್ಲ. ಅವರು ಸಾಮಾನ್ಯವಾಗಿ ಕೇವಲ ವಾಟ್ಸಾಪ್ ಮೂಲಕ ಮಾತ್ರವೇ ಸಂವಹನ ನಡೆಸುತ್ತಾರೆ. ಇದರಿಂದಾಗಿ ಕರೆ ಮಾಡಿದವರ ಸ್ಥಳವನ್ನು ಮತ್ತು ಅವರನ್ನು ಗುರುತಿಸುವುದು ಮತ್ತು ಅವರು ಕೊಡಮಾಡುವ ಕೆಲಸದ ಕುರಿತಂತೆ ಅದರ ನೈಜತೆಯನ್ನು ಖಚಿತಪಡಿಸಿಕೊಳ್ಳುವುದು ಕಷ್ಟವಾಗುತ್ತದೆ. ಅಂತಹ ಏಜೆಂಟ್ಗಳು ಕಾರ್ಮಿಕರನ್ನು ಕಷ್ಟಕರ ಮತ್ತು ಜೀವಕ್ಕೆ ಅಪಾಯಕಾರಿ ಪರಿಸ್ಥಿತಿಗಳಲ್ಲಿ ಕೆಲಸ ಮಾಡಲು ಅಮಿಷವೊಡ್ಡುತ್ತಾರೆ. ಹಲವಾರು ಪೂರ್ವ ಯುರೋಪಿಯನ್ ರಾಷ್ಟ್ರಗಳು, ಕೆಲವು ಗಲ್ಸ್ ರಾಷ್ಟ್ರಗಳು, ಮಧ್ಯ ಏμÁ್ಯದ ದೇಶಗಳು, ಇಸ್ರೇಲ್, ಕೆನಡಾ, ಮ್ಯಾನ್ಮಾರ್ ಮತ್ತು ಲಾವೊ ಪೀಪಲ್ಸ್ ಡೆಮಾಕ್ರಟಿಕ್ ರಿಪಬ್ಲಿಕ್ ನಲ್ಲಿ ಕೆಲಸ ಮಾಡಲು ನೇಮಕಾತಿಗಾಗಿ ಆಮಿಷವೊಡ್ಡುವ ಇಂತಹ ಪ್ರಕರಣಗಳು ವರದಿಯಾಗುತ್ತಿವೆ.
ಮಾನ್ಯತೆ ಇರುವ ಉದ್ಯೋಗಾವಕಾಶಗಳು ಎಂದರೆ ಅದು ನೇಮಕಾತಿ ಏಜೆಂಟ್, ವಿದೇಶದಲ್ಲಿರುವ ಉದ್ಯೋಗದಾತ, ಮತ್ತು ವಲಸೆ ಹೋಗಲು ಬಯಸುವ ಕೆಲಸಗಾರ ಈ ಮೂವರೂ ಸಹಿ ಮಾಡಿದ ಒಂದು ಉದ್ಯೋಗ ಒಪ್ಪಂದದ ಜೊತೆಗೆ ಬರುತ್ತದೆ. ಅಂತಹ ಉದ್ಯೋಗದ ಒಪ್ಪಂದ ಪತ್ರದಲ್ಲಿ. ನೀಡಲಾಗುವ ಕೆಲಸಕ್ಕೆ ಸಂಬಂಧಪಟ್ಟ ನಿಯಮಗಳು, ಷರತ್ತುಗಳು, ಸಂಬಳ ಮತ್ತು ಇತರ ಭತ್ಯೆಗಳನ್ನು ನಮೂದಿಸಬೇಕು. ಮಾನ್ಯತೆ ಇರುವ ಉದ್ಯೋಗಾವಕಾಶಗಳು ಪ್ರವಾಸಿ ವೀಸಾವನ್ನು ಹೊರತುಪಡಿಸಿ ಉದ್ಯೋಗ ವೀಸಾ, ಕೆಲಸದ ವೀಸಾ ಅಥವಾ ಇತರ ರೀತಿಯ ವೀಸಾಗಳ ಆಧಾರದ ಮೇಲೆ ವಲಸೆ ಹೋಗಲು ಅವಕಾಶ ನೀಡಬೇಕು. ಪ್ರವಾಸಿ ವೀಸಾವನ್ನು ಪ್ರವಾಸೋದ್ಯಮದ ಉದ್ದೇಶಕ್ಕಾಗಿ ಮಾತ್ರ ಬಳಸಬೇಕು ಎಂಬುದನ್ನು ಗಮನಿಸಿ. ಸಾಮಾನ್ಯವಾಗಿ, ಪ್ರತಿಷ್ಠಿತ ವಿದೇಶಿ ಉದ್ಯೋಗದಾತರು ವಿಮಾನ ದರ, ಊಟ, ವಸತಿ ಮತ್ತು ವಿಮೆಯ ವೆಚ್ಚವನ್ನು ಒದಗಿಸುತ್ತಾರೆ.
ವಲಸೆ ಹೋಗಲು ಬಯಸುವ ಕಾರ್ಮಿಕರು ಅವರು ಹೋಗಬೇಕಾಗಿರುವ ದೇಶದ ಸ್ಥಳೀಯ ಪರಿಸ್ಥಿತಿಗಳ ಬಗ್ಗೆ ಸ್ವತಃ ತಿಳಿದುಕೊಳ್ಳಬೇಕು. ಇದರ ಬಗ್ಗೆ ಮಾಹಿತಿಯನ್ನು ಅವರು ನಿರ್ಗಮನ-ಪೂರ್ವ ಓರಿಯಂಟೇಶನ್ ತರಬೇತಿ (ಪಿ.ಡಿ.ಓ.ಟಿ) ಕೇಂದ್ರಗಳಿಗೆ ಹಾಜರಾಗುವ ಮೂಲಕ ಅಥವಾ ಅವರು ಹೋಗಬೇಕಾಗಿರುವ ವಿದೇಶದ ಭಾರತೀಯ ರಾಯಭಾರ ಕಚೇರಿಯ ಸಮುದಾಯ ಕಲ್ಯಾಣ ವಿಭಾಗದಿಂದ ಪಡೆಯಬಹುದು. ನೋಂದಾಯಿತ ನೇಮಕಾತಿ ಏಜೆಂಟರು ವಲಸೆ ಕಾರ್ಮಿಕರಿಗೆ ಪ್ರವಾಸಿ ಭಾರತೀಯ ವಿಮಾ ಯೋಜನೆಯನ್ನು (ಪಿಬಿಬಿವೈ) ಖರೀದಿಸುವುದನ್ನು ಭಾರತ ಸರ್ಕಾರವು ಕಡ್ಡಾಯಗೊಳಿಸಿದೆ. ಈ ವಿಮಾ ಯೋಜನೆಗೆ ಒಂದು ಬಾರಿ ಪ್ರೀಮಿಯಂ ಪಾವತಿಸಬೇಕಾಗಿದ್ದು (ಎರಡು ವರ್ಷಗಳ ವಿಮೆಗೆ ರೂ. 275 ಮತ್ತು ಮೂರು ವರ್ಷಗಳ ವಿಮೆಗೆ ರೂ. 375) ಇದು ಸಾವಿನ ಪ್ರಕರಣಗಳಲ್ಲಿ ಮತ್ತು ಕೆಲಸಕ್ಕೆ ಸಂಬಂಧಿಸಿದ ಗಾಯ ಮತ್ತು ವೈದ್ಯಕೀಯ ವೆಚ್ಚಗಳ ಮೇಲೆ 10 ಲಕ್ಷ ಮೊತ್ತದ ವಿಮೆಯೂ ಸೇರಿದಂತೆ ವಿವಿಧ ಪ್ರಯೋಜನಗಳನ್ನು ಒದಗಿಸುತ್ತದೆ.
ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು, ವಿದೇಶದಲ್ಲಿ ಉದ್ಯೋಗವನ್ನು ಬಯಸುವವರು ನೋಂದಾಯಿತ ನೇಮಕಾತಿ ಏಜೆಂಟ್ಗಳು (ಆರ್.ಎ) ಒದಗಿಸುವ ಸುರಕ್ಷಿತ ಮತ್ತು ಕಾನೂನು ಸೇವೆಗಳನ್ನು ಮಾತ್ರ ಬಳಸಿಕೊಳ್ಳುವಂತೆ ವಿನಂತಿಸಲಾಗಿದೆ. ಎಲ್ಲಾ ನೋಂದಾಯಿತ ಆರ್.ಎ.ಗಳಿಗೆ ಪರವಾನಗಿ ಸಂಖ್ಯೆಯನ್ನು ನೀಡಲಾಗುತ್ತದೆ, ಅದನ್ನು ಅವರ ಕಚೇರಿ ಅವರಣದಲ್ಲಿ ಪ್ರದರ್ಶಿಸಲಾಗುತ್ತದೆ ಮತ್ತು ಪತ್ರಿಕೆಗಳು ಮತ್ತು ಸಾಮಾಜಿಕ ಮಾಧ್ಯಮ ಸೇರಿದಂತೆ ಅವರ ಜಾಹೀರಾತುಗಳಲ್ಲಿ ಎದ್ದು ಕಾಣುವಂತೆ ಪ್ರಕಟಿಸಲಾಗುತ್ತದೆ.
ವಲಸೆ ಹೋಗಲು ಬಯಸುವವರು ಸರ್ಕಾರಿ ವೆಬ್ ಸೈಟ್ www.emigrate.gov.in ಗೆ ಭೇಟಿ ನೀಡುವ ಮೂಲಕ ಮತ್ತು ಸಕ್ರಿಯ ಆರ್.ಎ.ಪಟ್ಟಿ" ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೇಮಕಾತಿ ಏಜೆಂಟ್ಗಳ ನೈಜತೆಯನ್ನು ಪರಿಶೀಲಿಸುವಂತೆ ಸಲಹೆ ನೀಡಲಾಗುತ್ತದೆ. ವಲಸೆ ಕಾಯಿದೆ, 1983 ರ ಪ್ರಕಾರ, ಯಾವುದೇ ನೇಮಕಾತಿ ಏಜೆಂಟ್ ಭಾವೀ ವಲಸಿಗರಿಂದ ಆ ವಲಸಿಗರಿಗೆ ಒದಗಿಸಿದ ಸೇವೆಗಳಿಗೆ ಸಂಬಂಧಿಸಿದಂತೆ ರೂ. 30,000 + ಜಿ.ಎಸ್.ಟಿ (18%) ಮೀರಿ ಸೇವಾ ಶುಲ್ಕವನ್ನು ವಿಧಿಸುವಂತಿಲ್ಲ ಮತ್ತು ನೇಮಕಾತಿ ಏಜೆಂಟ್ ಪಡೆದ ಮೊತ್ತಕ್ಕೆ ವಲಸಿಗರಿಗೆ ರಶೀದಿಯನ್ನು ನೀಡಬೇಕು. ನೇಮಕಾತಿಯ ಯಾವುದೇ ಇತರ ಚಾನೆಲ್ ಮೂಲಕ ವಿದೇಶಕ್ಕೆ ಹೋಗುವುದೆಂದರೆ ಅದು ಹಣದ ವಂಚನೆಗೆ ಒಳಗಾಗುವ ಮತ್ತು ಏಜಂಟ್ ವಾಗ್ದಾನ ಮಾಡಿದ ಉದ್ಯೋಗದ ಹೊರತಾಗಿ ಬೇರೆ ಕೆಲಸಕ್ಕೆ ಸೇರಬೇಕಾಗಿ ಬರುವ ಮತ್ತು ವಿದೇಶದಲ್ಲಿ ಕಷ್ಟಕರವಾದ ಜೀವನ ಪರಿಸ್ಥಿತಿಗಳನ್ನು ಎದುರಿಸಬೇಕಾಗಿ ಬರುವ ಗಂಭೀರ ಅಪಾಯವನ್ನು ಒಳಗೊಂಡಿರುತ್ತದೆ.
ನೋಂದಾಯಿಸಿಕೊಳ್ಳದ ಎಲ್ಲಾ ಏಜೆನ್ಸಿಗಳಿಗೆ ಸಾಗರೋತ್ತರ ನೇಮಕಾತಿ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಲಾಗುತ್ತಿದೆ. ಅಂತಹ ಚಟುವಟಿಕೆಗಳು ವಲಸೆ ಕಾಯಿದೆ, 1983ರ ಉಲ್ಲಂಘನೆಯಾಗಿದೆ ಮತ್ತು ಅದು ಮಾನವ ಕಳ್ಳಸಾಗಣೆಗೆ ಸಮಾನವಾಗಿದ್ದು, ಒಂದು ಶಿಕ್ಷಾರ್ಹ ಕ್ರಿಮಿನಲ್ ಅಪರಾಧವಾಗಿದೆ. ಯಾವುದೇ ದೂರುಗಳು ಮತ್ತು ಪ್ರಶ್ನೆಗಳಿದ್ದಲ್ಲಿ Pravasi Bharatiya Sahayata Kendra (PBSK), Ministry of External Affairs, Room No. 1005, 10th floor, Akbar Bhavan, Chanakyapuri, New Delhi-100021. Toll Free No. 1800 11 3090 (Accessible from India only). Chargeable No: +91-11-2688-5021 (Standard Long distance call charges apply). Whattsapp No. +91-7428 3211 44/ E-mail: helpline@mea.gov.in Or Office of Protector General of Emigrants, Ministry of External Affairs, Room No. 1009, 10th Floor, Akbar Bhavan, Chanakyapuri, New Delhi-100021. Email: pge@mea.gov.in/ diroe1@mea.gov.in Or Office of Protector of Emigrants, Bengaluru, Ministry of External Affairs, Govt. of India, First Floor, Regional Passport Office Building, 80ft Road, 8th Block, Koramangala, Bengaluru, Karnataka - 560095 Email: poebengaluru@mea.gov.in UÉ ¸ÀA¥ÀQð¸ÀĪÀÅzÀÄ
*******************************************************************************************
ಚಿರತೆ ಜತೆ ಹೋರಾಡಿ ಹೊಸ ಹೀರೋ ಎನಿಸಿಕೊಂಡ ಅಧಿಕಾರಿ
ಜಮ್ಮು: ನಮ್ಮ ಹೊಯ್ಸಳ ದೊರೆ ಹುಲಿಯೊಂದಿಗೆ ಕುಸ್ತಿ ಮಾಡಿದ ರೀತಿಯಲ್ಲೇ ಚಿರತೆಯೊಂದಿಗೆ ಹೋರಾಡಿ ಗೆದ್ದಿರುವ ಕಾಶ್ಮೀರದ ವನ್ಯಜೀವಿ ಇಲಾಖೆ ಅಧಿಕಾರಿಯೊಬ್ಬರು ರಾತ್ರೋರಾತ್ರಿ ಹೊಸ ಹೀರೋ ಆಗಿ ಹೊರಹೊಮ್ಮಿದ್ದಾರೆ.

ವನ್ಯಜೀವಿ ಅಧಿಕಾರಿ ಕಾಶ್ಮೀರದ ಗಂದರ್ಬಾಲ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಸಂಚರಿಸುತ್ತಿದ್ದ ಚಿರತೆಯನ್ನು ಕೇವಲ ಒಂದು ಕೋಲಿನಿಂದ ಹೆದರಿಸಿ ಬಂಧಿಸಿರುವ 50 ಸೆಕೆಂಡ್ಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ.
50 ಸೆಕೆಂಡ್ಗಳ ವೀಡಿಯೊದಲ್ಲಿ ಆತ ಚಿರತೆಯನ್ನು ಜೀವಂತವಾಗಿ ಸೆರೆಹಿಡಿಯಲು ಪ್ರಯತ್ನಿಸುತ್ತಿರುವಾಗ ವ್ಯಕ್ತಿ ಕೇವಲ ತನ್ನ ಕೈಗಳನ್ನು ಬಳಸಿ ಚಿರತೆಯೊಂದಿಗೆ ಸೆಣಸಾಡುತ್ತಿರುವುದನ್ನು ಕಾಣಬಹುದಾಗಿದೆ. ಅವನು ಕೋಲನ್ನು ತೆಗೆದುಕೊಳ್ಳಲು ಬಗ್ಗುವವರೆಗೆ ಪ್ರಾಣಿಯಿಂದ ಸುರಕ್ಷಿತ ಅಂತರವನ್ನು ಕಾಯ್ದುಕೊಂಡು ನಂತರ ಚಿರತೆಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಾನೆ.
ಇದ್ದಕ್ಕಿದ್ದಂತೆ, ಚಿರತೆ ಅವನ ಮೇಲೆ ಧಾವಿಸುತ್ತದೆ, ಶಕ್ತಿಯುತ ಪ್ರಾಣಿಯ ವಿರುದ್ಧ ಹೋರಾಟವನ್ನು ಮುಂದುವರೆಸಿದಾಗಲೂ ಅವನ ಕೈಯನ್ನು ಅದರ ಬಾಯಿಯಲ್ಲಿ ಹಿಡಿಯುತ್ತದೆ. ಅಂತಿಮವಾಗಿ, ಚಿರತೆಯ ಹಿಡಿತದಿಂದ ತನ್ನ ಕೈಯನ್ನು ಬಿಡಿಸಿಕೊಂಡು ಅದನ್ನು ಸದೆಬಡಿಯುವಲ್ಲಿ ಮನುಷ್ಯ ಯಶಸ್ವಿಯಾಗುತ್ತಾನೆ ನಂತರ ಸ್ಥಳೀಯರ ನೆರವಿನೊಂದಿಗೆ ಚಿರತೆಯನ್ನು ಜೀವಂತವಾಗಿ ಸೆರೆ ಹಿಡಿಯುತ್ತಾನೆ.
********************************************************************************************************************************
ವೀಲಿಂಗ್ ಮಾಡಿದ ಅಪ್ರಾಪ್ತ ಮಗ, ಪೊಷಕರ ವಿರುದ್ಧ ಎಫ್ಐಆರ್

ಬೆಂಗೂಳೂರು : ಅಪಾಯಕಾರ ರೀತಿಯಲ್ಲಿ ವೀಲಿಂಗ್ ಮಾಡುತ್ತಾ ಇತರೆ ವಾಹನ ಸವಾರರಿಗೆ ಆತಂಕವನ್ನು ಉಂಟುಮಾಡುತ್ತಿದ್ದ ವಿರುದ್ಧ ಕೆ.ಆರ್.ಪುರ ಸಂಚಾರಿ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿ ದ್ದಾರೆ.
ವೀಲಿಂಗ್ ಮಾಡುವವರನ್ನು ಪತ್ತೆ ಹಚ್ಚಲು ವಿಶೇಷ ಕಾರ್ಯಾಚರಣೆ ಕೈಗೊಂಡು ಹಳೇ ಮದ್ರಾಸ್ ರಸ್ತೆಯಲ್ಲಿ ಠಾಣಾ ಸಿಬ್ಬಂದಿ ಗಸ್ತಿನಲ್ಲಿದ್ದಾಗ ದ್ವಿಚಕ್ರ ವಾಹನದಲ್ಲಿ ವೀಲಿಂಗ್ ಮಾಡಿಕೊಂಡು ಬರುತ್ತಿದ್ದ ಸವಾರನನ್ನು ವಾಹನ ಸಮೇತ ವಶಕ್ಕೆ ಪಡೆದಿದ್ದಾರೆ.ಸವಾರ ಅಪ್ರಾಪ್ತ ಬಾಲಕನಾಗಿರುವ ಹಿನ್ನೆಲೆಯಲ್ಲಿ ಆತನ ಪೊಷಕರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ಕಾನೂನು ರೀತಿ ಕ್ರಮ ಕೈಗೊಳ್ಳಲಾಗಿದೆ ಎಂದು ಪೂರ್ವ ಸಂಚಾರ ವಿಭಾಗದ ಉಪಪೊಲೀಸ್ ಆಯುಕ್ತರಾದ ಕುಲ್ದೀಪ್ ಕುಮಾರ್ ಆರ್ ಜೈನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Publisher: ಕನ್ನಡ ನಾಡು | Kannada Naadu