ಬೆಂಗಳೂರು : ಬೆಂಗಳೂರಿನ ಶ್ರೀ ಚಾಮರಾಜೇಂದ್ರ ಕಬ್ಬನ್ ಉದ್ಯಾನವನದಲ್ಲಿ ಸ್ವಚ್ಛತೆಯನ್ನು ಕಾಪಾಡಲು ಹಾಗೂ ಉದ್ಯಾನವನದ ಸಂರಕ್ಷಣಾ ಹಿತದೃಷ್ಟಿಯಿಂದ ಉದ್ಯಾನವನದ ಆವರಣದಲ್ಲಿ ಅನುಮತಿಸಬಹುದಾದ ಚಟುವಟಿಕೆಗಳು, ನಿರ್ಧಿಷ್ಠ ಚಟುವಟಿಕೆಗಳು ಹಾಗೂ ಪಾಲಿಸಬೇಕಾದ ಇತರೆ ಅವಶ್ಯಕ ನಿಯಮಗಳನ್ನು ಸರ್ಕಾರವು 2025ನೇ ಏಪ್ರಿಲ್ 23 ರಂದು ಜಾರಿ ಮಾಡಿ ಆದೇಶಿಸಿದೆ.
ಕಬ್ಬನ್ ಉದ್ಯಾನವನದ ಸಂರಕ್ಷಣಾ ಹಿತದೃಷ್ಟಿಯಿಂದ ರಚಿಸಲಾಗಿರುವ ನಿಯಮಗಳನ್ನು ಉಲ್ಲಂಘಿಸಿದ ಪ್ರತಿ ಒಬ್ಬರಿಗೆ ಗರಿಷ್ಠ ರೂ.500/- ಗಳವರೆಗೆ ದಂಡ ವಿಧಿಸಲು ಹಾಗೂ ಪದೇ ಪದೇ ಉಲ್ಲಂಘಿಸಿದಲ್ಲಿ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ತೋಟಗಾರಿಕೆ ನಿರ್ದೇಶಕರು, ಬೆಂಗಳೂರು ಇವರು ತೋಟಗಾರಿಕೆ ಉಪ ನಿರ್ದೇಶಕರು, ಶ್ರೀ ಚಾಮರಾಜೇಂದ್ರ (ಕಬ್ಬನ್) ಉದ್ಯಾನವನ, ಬೆಂಗಳೂರು ರವರಿಗೆ ಅಥವಾ ಸಂಬಂಧಿಸಿದ ಸೂಕ್ತ ಅಧಿಕಾರಿಗೆ ಅವಕಾಶ ಕಲ್ಪಿಸಿಕೊಡುವಂತೆ ಆದೇಶಿಸಿದೆ.
ಉಲ್ಲಂಘಿಸಿದ ದಂಡದ ಮೊತ್ತ ಹಾಗೂ ಷರತ್ತಿಗೊಳಪಟ್ಟು ಅನುಮತಿಸಲು ವಿಧಿಸಿರುವ ಮೊತ್ತವನ್ನು ಸುವರ್ಣ ಕರ್ನಾಟಕ ಉದ್ಯಾನವನ ಪ್ರತಿμÁ್ಠನದ ಖಾತೆಗೆ ಜಮೆ ಮಾಡುವುದು. ಅನುಮತಿಸಬಹುದಾದ ಚಟುವಟಿಕೆಗಳು, ನಿರ್ಧರಿಸಿದ ಚಟುವಟಿಕೆಗಳು ಹಾಗೂ ಪಾಲಿಸಬೇಕಾದ ಇತರೆ ಅವಶ್ಯಕ ನಿಯಮಗಳನ್ನು ವ್ಯಾಪಕ ಪ್ರಚಾರ ಪಡಿಸಲು ತೋಟಗಾರಿಕೆ ನಿರ್ದೇಶಕರು, ಬೆಂಗಳೂರು ಹಾಗೂ ಸಂಬಂಧಿಸಿದ ಅಧಿಕಾರಿಗಳು ಅಗತ್ಯ ಕ್ರಮವಹಿಸುವಂತೆ ಆದೇಶಿಸಿದೆ.
ಅನುಮತಿ ಸಬಹುದಾದ ಚಟುವಟಿಕೆಗಳು :
ತೋಟಗಾರಿಕೆ ಇಲಾಖೆಯ ಪೂರ್ವಾನುಮತಿ ಪಡೆದು ವಿವಿಧ ಸರ್ಕಾರಿ/ಖಾಸಗಿ ಸಂಸ್ಥೆಗಳು ಆಯೋಜಿಸುವ ವಾಕಾಥಾನ್ ಮತ್ತು ಮ್ಯಾರಾಥಾನ್ ಕಾರ್ಯಕ್ರಮಗಳು. ತೋಟಗಾರಿಕೆ ಇಲಾಖೆಯ ಪೂರ್ವಾನುಮತಿ ಪಡೆದು ಸರ್ಕಾರದ ವಿವಿಧ ಇಲಾಖೆಗಳು ಆಯೋಜಿಸುವ ಅರಿವು ಮೂಡಿಸುವ ಕಾರ್ಯಕ್ರಮಗಳು.
ವಾಯು ವಿಹಾರದ ಸಮಯ ಬೆಳಿಗ್ಗೆ 5.30 ಗಂಟೆಯಿಂದ ಬೆಳಿಗ್ಗೆ 9.00 ಗಂಟೆಯವರೆಗೆ ಹಾಗೂ ಸಂಜೆ 4.30 ಗಂಟೆಯಿಂದ ಸಂಜೆ 6.30 ಗಂಟೆಯವರೆಗೆ ನಿಗಧಿಪಡಿಸಿದೆ.
ಉದ್ಯಾನವನದ ಸ್ವಚ್ಛತೆಯನ್ನು ಕಾಪಾಡುವ ಷರತ್ತಿಗೊಳಪಟ್ಟು ತೋಟಗಾರಿಕೆ ಇಲಾಖೆಯ ಪೂರ್ವಾನುಮತಿ ಪಡೆದು ಬ್ಯಾಂಡ್ ಸ್ಟ್ಯಾಂಡ್ ಆವರಣದಲ್ಲಿ ಆಯೋಜಿಸುವ ಕಾರ್ಯಕ್ರಮಗಳು.
ತೋಟಗಾರಿಕೆ ಇಲಾಖೆಯ ಪೂರ್ವಾನುಮತಿ ಪಡೆದು ಕೈಗೊಳ್ಳುವ ಸಸ್ಯ/ವನ್ಯಜೀವಿ/ಪ್ರಾಕೃತಿಕ ಹವ್ಯಾಸಿ ಛಾಯಾಗ್ರಹಣಕ್ಕೆ ಅನುಮತಿಸಿದೆ. ಯಾವುದೇ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶವಿಲ್ಲದ ಹಾಗೂ ಸ್ವಚ್ಛತೆಯನ್ನು ಕಾಪಾಡುವ ಷರತ್ತಿಗೊಳಪಟ್ಟು ತೋಟಗಾರಿಕೆ ಇಲಾಖೆಯ ಪೂರ್ವಾನುಮತಿ ಪಡೆದು ಯೋಗ/ಮೆಡಿಟೇಷನ್ ಹಾಗೂ ಪೂರಕ ಕಾರ್ಯಚಟುವಟಿಕೆಗಳು ಸಂಖ್ಯೆ ಗರಿಷ್ಠ 20 ಜನರಿರುವ ಪ್ರತಿತಂಡಕ್ಕೆ ಮಿತಿಗೊಳಿಸಿ ಆಯೋಜಿಸುವ ಕಾರ್ಯಚಟುವಟಿಕೆಗಳಿಗೆ ಅನುಮತಿಸಬಹುದು.
ತೋಟಗಾರಿಕೆ ಇಲಾಖೆಯ ಪೂರ್ವಾನುಮತಿ ಪಡೆದು ಗರಿಷ್ಠ 20 ಜನರಿರುವ ಹವ್ಯಾಸಿ ಓದುಗರು / ಬರವಣಿಗೆಗಾರರು ಆಸನಗಳನ್ನು ಬಳಸಿಕೊಳ್ಳವುದು. ಉದ್ಯಾನವನಕ್ಕೆ ಆಗಮಿಸುವ ಸಾರ್ವಜನಿಕರು, ಪ್ರವಾಸಿಗರು ಕ್ಯಾಮರಾಗಳನ್ನು ಬಳಸಬಹುದು ಆದರೆ ಫೆÇೀಟೋಶೂಟ್ (ಪ್ರೀ/ಪೆÇೀಸ್ಟ್ ವೆಡ್ಡಿಂಗ್ ಶೂಟ್ಸ್, ಬೇಬಿ, ಮಾಡಲಿಂಗ್ ಶೂಟ್ಸ್) ವೀಡಿಯೋ ಚಲನಚಿತ್ರ ಚಿತ್ರೀಕರಣ ನಿಷೇಧಿಸಿದೆ. ಕಿರು ಚಿತ್ರಗಳು/ ರೀಲ್ಸ್/ವಿಡಿಯೋ ಚಲನಚಿತ್ರ ಚಿತ್ರೀಕರಣ ನಿμÉೀಧಿಸಲಾಗಿದೆ.
ಸÀರ್ಕಾರಿ/ಅಧಿಕೃತ ನೋಂದಾಯಿತ ಚಾರಿಟಬಲ್ ಟ್ರಸ್ಟ್ಗಳ ವತಿಯಿಂದ ಮಾತ್ರ ಆಯೋಜಿಸಲ್ಪಡುವ ಆರೋಗ್ಯ ತಪಾಸಣಾ ಶಿಬಿರಗಳು. ಬೆಳಿಗ್ಗೆ 8.00 ಗಂಟೆಯ ನಂತರ ಸಂಜೆ 6.00 ಗಂಟೆಯವರೆಗೆ ಉದ್ಯಾನವನಕ್ಕೆ ಆಗಮಿಸುವ ಬೈಸಿಕಲ್ ಸವಾರರು, ಬೈಸಿಕಲ್ ಬಳಸಬಹುದು. ತರಬೇತಿದಾರರಿಗೆ ಅವಕಾಶವಿರುವುದಿಲ್ಲ.
ಸ್ವತಃ ಸ್ಕೇಟಿಂಗ್ ಮಾಡುವವರು / ಕುಟುಂಬದ ಸದಸ್ಯರೊಂದಿಗೆ ಸ್ಕೇಟಿಂಗ್ ಮಾಡುವವರು ವಾಹನ ಸಂಚಾರ ನಿμÉೀಧಿಸಿರುವ ದಿನಗಳಂದು ಕಬ್ಬನ್ ಉದ್ಯಾನವನದ ಎನ್.ಜಿ.ಓ ಪ್ರವೇಶ ದ್ವಾರದಿಂದ ಇಂದಿರಾ ಪ್ರಿಯದರ್ಶಿನಿ ಮಕ್ಕಳ ಗ್ರಂಥಾಲಯದ ಎದುರಿಗಿರುವ ರಸ್ತೆಯನ್ನು ಸೈಟಿಂಗ್ ಗಾಗಿ ಬೆಳಗ್ಗೆ 6.00 ರಿಂದ ಸಂಜೆ 6.00 ಗಂಟೆಯವರೆಗೆ ಬಳಸಲು ಸೀಮಿತಗೊಳಿಸಿದೆ. ಸ್ಕೇಟಿಂಗ್ ತರಬೇತಿ, ಸ್ಟಂಟ್ ಇತ್ಯಾದಿಗಳನ್ನು ಕೈಗೊಳ್ಳಲು ಅವಕಾಶವಿರುವುದಿಲ್ಲ.
ಕಬ್ಬನ್ ಉದ್ಯಾನವನದ ಆವರಣದಲ್ಲಿ ನಡೆಯುವ ಮ್ಯಾರಾಥಾನ್, ವಾಕಾಥಾನ್ ಸಂಬಂಧ 2023ನೇ ಮೇ 17ರ ಎಸ್.ಕೆ.ಯು.ಪಿ.ಎಫ್ ಸಭೆಯ ನಿರ್ಣಯದಂತೆ ಕಾರ್ಯಕ್ರಮ ಒಂದಕ್ಕೆ ರೂ. 30,000/- ಗಳ ಶುಲ್ಕ ನಿಗಧಿಪಡಿಸಿದ್ದು ಹಾಗೂ ಕಾರ್ಯಕ್ರಮ ಸಂಬಂಧ ರೂ. 20,000/- ಗಳ ಮುಂಗಡ ಠೇವಣಿಯನ್ನು ಪಾವತಿ ಮಾಡಿದರೆ ಕೆ.ಎಸ್.ಎಲ್.ಟಿ.ಎ ಹಿಂಭಾಗದ ಜಾವಾಫಿಗ್ ಅವಿನ್ಯೂ ರಸ್ತೆಯಲ್ಲಿ ಕಾರ್ಯಕ್ರಮಕ್ಕೆ ಪೂರಕವಾಗಿ 1 ಅಡಿ ಎತ್ತರದ ವೇದಿಕೆ ನಿರ್ಮಾಣ ಮಾಡಲು, ಕಡಿಮೆ ಶಬ್ದವುಳ್ಳ ಧ್ವನಿವರ್ದಕ ಬಳಕೆ ಹಾಗೂ ಪ್ಯಾಕ್ ಮಾಡಿದ ಫುಡ್ ವಿತರಿಸಿ ಸ್ವಚ್ಛತೆಯನ್ನು ಕಾಪಾಡುವ ಷರತ್ತಿಗೊಳಪಟ್ಟು ಅನುಮತಿ ನೀಡುವುದು.
ತೋಟಗಾರಿಕೆ ಇಲಾಖೆಯ ಪೂರ್ವಾನುಮತಿ ಪಡೆದು ವೈಯಕ್ತಿಕವಾಗಿ ಕೈಗೊಳ್ಳುವ ಪರಿಸರ ಪೂರಕ ಚಿತ್ರಕಲೆ ಕೈಗೊಳ್ಳುವುದು (ಯಾವುದೇ ರೀತಿಯ ವಾಣಿಜ್ಯ ಚಿತ್ರಕಲೆ/ಮಾರಾಟವನ್ನು ನಿಷೇಧಿಸಿದೆ ) ಕಬ್ಬನ್ ಉದ್ಯಾನವನದ ಬಿ.ಎಸ್.ಎನ್.ಎಲ್. ಪ್ರವೇಶ ದ್ವಾರದಿಂದ ಗಜಿಬೋ, ನಾಲಾ ಬದುವಿಗೆ ಹೊಂದಿಕೊಂಡಂತೆ. ನಾಲಾ ಬದುವಿನ ಸೇತುವೆಯಿಂದ ಹೈಕೋರ್ಟ್ ಗೆ ಹೊಂದಿಕೊಂಡಂತಿರುವ ವಾಹನ ನಿಲ್ಯಾಣದ ಸರಹದ್ಧಿನ ಬೇಲಿವರೆಗಿನ ಸುಮಾರು 15 ಎಕರೆ ವಿಸ್ತೀರ್ಣ ಪ್ರದೇಶವನ್ನು ವಾಣಿಜ್ಯ ಚಟುವಟಿಕೆಗಳು/ಪ್ರಾಯೋಜಕತ್ವ ಚಟುವಟಿಕೆಗಳನ್ನು ಹೊರತುಪಡಿಸಿ, ಪುಸ್ತಕ ಓದುವುದು, ಯೋಗ ಮಾಡುವುದು. ಧ್ಯಾನ ಮಾಡುವುದು, ಪೈಂಟಿಂಗ್, Get Together ಚಟುವಟಿಕೆಗಳನ್ನು ಕೈಗೊಳ್ಳುವ ಸಲುವಾಗಿ ಮೀಸಲಿಡಬಹುದಾಗಿದ್ದು, ಮೇಲಿನ ಎಲ್ಲಾ ಚಟುವಟಿಕೆಗಳಿಗೆ 20 ಜನರಿಗಿಂತ ಹೆಚ್ಚಿಗೆ ಜನರು ಸೇರಿ ಆಯೋಜಿಸುವಂತ ಕಾರ್ಯಕ್ರಮಗಳಿಗೆ. ತೋಟಗಾರಿಕೆ ಉಪನಿರ್ದೇಶಕರು, ಕಬ್ಬನ್ ಉದ್ಯಾನವನ ರವರಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ.
ನಿμÉೀಧಿಸಿದ ಚಟುವಟಿಕೆಗಳು:
ಉದ್ಯಾನವನದ ಒಳ ರಸ್ತೆಗಳಲ್ಲಿ ಭಾರಿ ವಾಹನಗಳಾದ ಬಸ್ಸು, ಲಾರಿ, ಗೂಡ್ಸ್ ವಾಹನ ಹಾಗೂ ಆಟೋ ಗಾಡಿಗಳನ್ನು ನಿಭರ್ಂಧಿಸಿದೆ. ಉದ್ಯಾನವನದ ಆವರಣದಲ್ಲಿ ಮಾರಾಟಗಾರರು / ತಿರುಗು ಮಾರಾಟಗಾರರನ್ನು ನಿಷೇಧಿಸಿದೆ.
ಉದ್ಯಾನವನದ ಆವರಣದಲ್ಲಿ ದೂಮಪಾನ, ಮದ್ಯಪಾನ ಮತ್ತು ಮಾದಕ ವಸ್ತುಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಉದ್ಯಾನವನದ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ವಸ್ತುಗಳು, ಬಾಟಲಿ, ಪ್ಲಾಸ್ಟಿಕ್ ಚೀಲ. ಪೂಜಾ ಸಾಮಗ್ರಿ ಹಾಗೂ ಇತರೆ ಯಾವುದೇ ತ್ಯಾಜ್ಯಗಳನ್ನು ಉದ್ಯಾನವನಕ್ಕೆ ತರುವುದು, ಎಲ್ಲೆಂದರಲ್ಲಿ ಹಾಕುವುದು/ ಎಸೆಯುವುದನ್ನು ನಿಷೇಧಿಸಿದೆ.
ಪಾರ್ಸೆಲ್ ಊಟ / ತಿಂಡಿ ಪದಾರ್ಥಗಳನ್ನು ಉದ್ಯಾನವನದ ಒಳಗಡೆ ಸೇವಿಸುವುದನ್ನು ನಿಷೇಧಿಸಿದೆ. ಉದ್ಯಾನವನದ ನಿಗಧಿತ ವಾಹನ ನಿಲುಗಡೆ ಪ್ರದೇಶಗಳಲ್ಲಿ ಮಾತ್ರ ವಾಹನಗಳನ್ನು ನಿಲ್ಲಿಸುವುದು. ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುವುದನ್ನು ನಿಷೇಧಿಸಿದೆ. ಉದ್ಯಾನವನದ ರಸ್ತೆಗಳಲ್ಲಿ ವಾಹನಗಳು ಹಾರ್ನ್ ಮಾಡುವುದನ್ನು ನಿಷೇಧಿಸಿದೆ. ಉದ್ಯಾನವನದ ಹುಲ್ಲುಹಾಸುಗಳ ಮೇಲೆ ಆಟ ಆಡುವುದುನ್ನು ನಿಷೇಧಿಸಿದೆ.
ಉದ್ಯಾನವನದಲ್ಲಿ ಮರಗಳನ್ನು ಹತ್ತುವುದು, ಮರದ ರೆಂಬೆ ಹಿಡಿದು ಜೋಕಾಲಿ ಆಡುವುದು, ಮರ/ಗಿಡಗಳಿಂದ ಎಲೆ/ಕಾಯಿ/ಹೂಗಳನ್ನು ಕೀಳುವುದನ್ನು ಮರಗಳ ತೊಗಟೆಯ ಮೇಲೆ ಕೆತ್ತನೆ ಮಾಡುವುದನ್ನು ನಿಷೇಧಿಸಿದೆ. ಉದ್ಯಾನವನದ ಯಾವುದೇ ಸ್ವತ್ತುಗಳಿಗೆ ಬೆಂಕಿ ಹಚ್ಚುವಂತಿಲ್ಲ. ಬಲೂನು ಹಾಗೂ ಇತರೆ ಆಟದ ಸಾಮಾನುಗಳನ್ನು ಬಳಸುವುದು, ಗಾಳಿಪಟ ಹಾರಿಸುವುದು, ಬ್ರಿಸ್ಬಿ ಆಡುವುದನ್ನು ಹಾಗೂ ಇತರೆ ಆಟಗಳನ್ನು ಆಡುವುದನ್ನು ನಿಷೇಧಿಸಿದೆ. ಕೆರೆ/ ಕಲ್ಯಾಣಿಗೆ ಇಳಿಯಬಾರದು, ಮರದ ಕಲಾಕೃತಿಗಳನ್ನು ಮುಟ್ಟಬಾರದು.
ಉದ್ಯಾನವನದ ಆವರಣದಲ್ಲಿ ಅಸಭ್ಯ ವರ್ತನೆ ನಿಷೇಧಿಸಿದೆ. ಉದ್ಯಾನವನದಲ್ಲಿರುವ ಅಲಂಕಾರಿಕ ವಿನ್ಯಾಸ ಮತ್ತು ಪರ್ಗೋಲಗಳ ಮೇಲೆ ಹತ್ತುವುದನ್ನು ನಿಷೇಧಿಸಿದೆ. ಸಾರ್ವಜನಿಕರು/ ಸಂಘಸಂಸ್ಥೆಗಳು ಉದ್ಯಾನವನದ ಒಳಗಡೆ ಯಾವುದೇ ಬ್ಯಾನರ್ /ಪೆÇೀಸ್ಟ್ ಗಳನ್ನು ಹಾಕುವಂತಿಲ್ಲ. ಉದ್ಯಾನವನದ ಒಳಗಡೆ ನಿರ್ದಿಷ್ಟವಾದ / ನಿಗಧಿತ ಶೌಚಾಲಯಗಳನ್ನು ಹೊರತುಪಡಿಸಿ, ಇನ್ನಿತರೆ ಸ್ಥಳಗಳಲ್ಲಿ ಮಲಮೂತ್ರ ವಿಸರ್ಜಿಸುವುದು ಹಾಗೂ ಉಗುಳುವುದನ್ನು ನಿಷೇಧಿಸಿದೆ.
ಉದ್ಯಾನವನದ ಆವರಣಕ್ಕೆ ಮಾರಕಾಸ್ತ್ರ / ಸ್ಫೋಟಕ ವಸ್ತುಗಳು, ಇನ್ನಿತರೆ ಅಪಾಯಕಾರಿ ವಸ್ತುಗಳನ್ನು ತರುವುದು ನಿಷೇಧಿಸಿದೆ. ಉದ್ಯಾನವನದ ಆವರಣದಲ್ಲಿ ಪಟಾಕಿ ಹಚ್ಚುವುದು. ಶಬ್ದಮಾಲಿನ್ಯ ವಾಯುಮಾಲಿನ್ಯ ಮತ್ತು ಜಲಮಾಲಿನ್ಯಕ್ಕೆ ಕಾರಣವಾಗುವ ಚಟುವಟಿಕೆಗಳನ್ನು ನಿಷೇಧಿಸಿದೆ. ಉದ್ಯಾನವನದ ಆವರಣದಲ್ಲಿ ಭಿಕ್ಷಾಟನೆ ಮಾಡುವುದು, ಶಾಸ್ತ್ರ/ಭವಿಷ್ಯ ಹೇಳುವುದು, ಹಣ /ಚಂದಾವಸೂಲಿ ಮಾಡುವುದನ್ನು ನಿಷೇಧಿಸಿದೆ.
ಸಭೆ ಸಮಾರಂಭ, ಸೌಹಾರ್ದ ಕಾರ್ಯಕ್ರಮ, ಸುದ್ದಿಗೋಷ್ಠಿ, ಹುಟ್ಟುಹಬ್ಬ ಹಾಗೂ ಇತರೆ ಯಾವುದೇ ಆಚರಣೆಗಳನ್ನು ಉದ್ಯಾನವನದ ಆವರಣದಲ್ಲಿ ನಿಷೇಧಿಸಿದೆ. (ಕಬ್ಬನ್ ಉದ್ಯಾನವನಕ್ಕೆ ಸಂಬಂಧಿಸಿದಂತೆ ಹಾಗೂ ರಾಷ್ಟ್ರೀಯ ಹಬ್ಬಗಳು / ಸರ್ಕಾರಿ ಕಾರ್ಯಕ್ರಮಗಳನ್ನು ಹೊರತುಪಡಿಸಿ) ಉದ್ಯಾನವನದ ಸಸ್ಯ ಪ್ರಾಣಿ ಸಂಕುಲ, ಸಂಕುಲಗಳಿಗೆ ಉಂಟುಮಾಡುವ ಯಾವುದೇ ತರಹದ ಚಟುವಟಿಕೆಗಳನ್ನು ನಿಷೇಧಿಸಿದೆ.
ಪಾಲಿಸಬೇಕಾದ ಇತರೆ ಅವಶ್ಯ ನಿಯಮಗಳು :
ಮಳೆ, ಗಾಳಿಯ ಸಂದರ್ಭದಲ್ಲಿ ಮರದ ಕೆಳಗೆ ನಿಲ್ಲಬಾರದು. ಉದ್ಯಾನವನದ ಆವರಣದಲ್ಲಿರುವ ವಿದ್ಯುತ್ ಕಂಬ, ಪ್ಯಾನಲ್ ಬೋರ್ಡ್ ಹಾಗೂ ವಿದ್ಯತ್ ಜಂಕ್ಷನ್ ಬಾಕ್ಸ್ ಗಳಿಂದ ದೂರವಿರತಕ್ಕದ್ದು. ಉದ್ಯಾನವನದ ಮರದ ಪೆÇಟರೆ, ಬಿಲಗಳು, ಪೆÇದೆಗಳಲ್ಲಿ ಹಾಗೂ ಇತರೆ ಜಾಗಗಳಲ್ಲಿ ಹಾವುಗಳು ಇರುವ ಸಂಭವ ಇರುತ್ತದೆ ಎಚ್ಚರ ವಹಿಸುವುದು.
ಪೆÇೀಷಕರು ತಮ್ಮ ಮಕ್ಕಳ ಬಗ್ಗೆ ಸದಾ ಎಚ್ಚರವಹಿಸುವುದು, ಯಾವುದೇ ಕಾರಣಕ್ಕೂ ಮಕ್ಕಳನ್ನು ಆಟವಾಡಲು ಒಂಟಿಯಾಗಿ ಬಿಡಬಾರದು ಮತ್ತು ನಿμÉೀಧಿತ ಪ್ರದೇಶಗಳಲ್ಲಿ ಓಡಾಡಲು ಬಿಡಬಾರದು. ಬೆಂಚುಗಳು, ವಿದ್ಯುತ್ ಕಂಬಗಳು ಇತ್ಯಾದಿ ಉದ್ಯಾನವನದ ಮೂಲಭೂತ ಸೌಕರ್ಯಗಳನ್ನು ಉಪಯೋಗಿಸಿಕೊಂಡು ಆಟವಾಡುವುದು / ವ್ಯಾಯಾಮ ಮಾಡುವುದನ್ನು ನಿಷೇಧಿಸಿದೆ. ಜೇನುನೊಣಗಳ ಬಗ್ಗೆ ಎಚ್ಚರವಹಿಸುವುದು. ಕಬ್ಬನ್ ಉದ್ಯಾನವನದ ಸೂಚನೆಗಳನ್ನು ಉಲ್ಲಂಘಿಸಿ ಸಂಭವಿಸಬಹುದಾದ ಅನಾಹುತಗಳಿಗೆ ಅವರೇ ಜವಾಬ್ದಾರರು ಎಂದು ತೋಟಗಾರಿಕಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Publisher: ಕನ್ನಡ ನಾಡು | Kannada Naadu