CreamA Cream article
Article

ಭಗವದ್ಗೀತೆ ಹಾಗೂ ಭರತ ನಾಟ್ಯಶಾಸ್ತ್ರ ಯುನೆಸ್ಕೋದ 'ಮೆಮೋರಿ ಆಫ್ ದಿ ವರ್ಲ್ಡ್' ಪಟ್ಟಿಗೆ ಸೇರ್ಪಡೆ

ಕನ್ನಡ ನಾಡು


ಭಾರತದ ಹೆಮ್ಮೆಯ ಧರ್ಮ ಗ್ರಂಥ ಭಗವದ್ಗೀತೆ ಮತ್ತು ಭರತ ಮುನಿಯಿಂದ ಆರಂಭಿಸಲ್ಪಟ್ಟ ಭರತ ನಾಟ್ಯಶಾಸ್ತ್ರವನ್ನು  ʻಯುನೆಸ್ಕೋ ಸಂಸ್ಥೆಯʼ ‘ಮೆಮೋರಿ ಆಫ್ ದಿ ವರ್ಲ್ಡ್ ರಿಜಿಸ್ಟರ್’ ಎಂಬ ವಿಶ್ವಪ್ರಸಿದ್ಧ ಪಟ್ಟಿಗೆ ಸೇರಿಸಲಾಗಿದೆ.

ಈ ವಿಷಯವನ್ನು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಅಧಿಕೃತವಾಗಿ ಘೋಷಿಸಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. ಈ ಸೇರ್ಪಡೆ ಭಾರತೀಯರ ಕಾಲಾತೀತ ಜ್ಞಾನ, ಸಂಸ್ಕೃತಿ, ಮತ್ತು ಪಾರಂಪರ್ಯದ ಜಾಗತಿಕ ಮಾನ್ಯತೆಯಾಗಿದೆ ಎಂದು ಅವರು ಹೇಳಿದ್ದಾರೆ.

ನಾಟ್ಯಶಾಸ್ತ್ರವು ಭಾರತೀಯ ನೃತ್ಯ-ನಾಟಕ ಕಲೆಯ ಮೂಲಗ್ರಂಥವಾಗಿದ್ದು, ಭಗವದ್ಗೀತೆ ಮಾನವತೆಯ ಆತ್ಮಶೋಧನೆಗೆ ಮಾರ್ಗದರ್ಶಕ ಗ್ರಂಥವಾಗಿದೆ. ಇವುಗಳ ಸೇರ್ಪಡೆ ಭಾರತದ ತಾತ್ವಿಕ, ಸಾಂಸ್ಕೃತಿಕ ಬೆಳವಣಿಗೆಗೆ ಅಂತಾರಾಷ್ಟ್ರೀಯ ಮನ್ನಣೆಯಾಗಿದೆ.

Read More