ಕನ್ನಡ ನಾಡು | Kannada Naadu

ವಕ್ಫ್ ಆಸ್ತಿ ಕಬಳಿಸಿದ ಕರ್ನಾಟಕದ ರಾಜಕಾರಣಿಗಳ ಹೆಸರು ಬಹಿರಂಗ, ಕಾಂಗ್ರೆಸ್‌ಗೆ ಮುಜುಗರ

04 Apr, 2025

      ನವದೆಹಲಿ: ಕರ್ನಾಟಕದ ಬಿಜೆಪಿ ಉಸ್ತುವಾರಿ ಹಾಗೂ ರಾಜ್ಯಸಭಾ ಸದಸ್ಯ ರಾಧಾ ಮೋಹನದಾಸ್‌‍ ಅಗರ್ವಾಲ್‌, ಕರ್ನಾಟಕದಲ್ಲಿ ಯಾವಯಾವ ನಾಯಕರು ವಕ್ಫ್ ಆಸ್ತಿಯನ್ನು ಕಬಳಿಸಿದ್ದಾರೆ ಎಂಬ ವಿವರವನ್ನು ಸದನದ ಕಲಾಪದ ವೇಳೆಯಲ್ಲಿಯೇ ಬಹಿರಂಗಪಡಿಸುವ ಮೂಲಕ, ಕಾಂಗ್ರೆಸ್ಸಿಗೆ ಇನ್ನಿಲ್ಲದ ಮುಜುಗರ ತಂದೊಡ್ಡಿದ್ದಾರೆ.

ಕರ್ನಾಟಕದಲ್ಲಿ ಯಾರು ವಕ್‌್ಫ ಆಸ್ತಿಯನ್ನು ಕಬಳಿಸಿದ್ದಾರೆ ಎನ್ನುವ ವರದಿಯು ಜೆಪಿಸಿಯಲ್ಲಿ ಉಲ್ಲೇಖವಾಗಿದೆ. ಆ ವರದಿಯನ್ನು ನಾನು ಇಲ್ಲಿ ಓದುತ್ತೇನೆ.ಇದು ನನ್ನ ಕರ್ತವ್ಯ ಕೂಡಾ. ವಕ್‌್ಫ ಸಂಪತ್ತನ್ನು ಲೂಟಿ ಮಾಡಿದವರ ಹೆಸರನ್ನು ನಾನು ಹೇಳುತ್ತೇನೆ ಎಂದು ರಾಧಾ ಮೋಹನದಾಸ್‌‍ ಅಗರ್ವಾಲ್‌ ಹೇಳಿದ್ದಾರೆ.

 
ಇನ್ನೂ ಒಂದು ಪ್ರಮುಖ ಹೆಸರು ಪಟ್ಟಿಯಲ್ಲಿದೆ, ಆ ಹೆಸರನ್ನು ನಾನು ಹೇಳುವುದಿಲ್ಲ. ಅದು, ಸದನದ ಮರ್ಯಾದೆಯ ಪ್ರಶ್ನೆ, ಹಾಗಾಗಿ ಗೌರವಸೂಚಕವಾಗಿ ಆ ಹೆಸರನ್ನು ಬಹಿರಂಗ ಪಡಿಸುವುದಿಲ್ಲ. ಆದರೆ, ಆ ಹೆಸರು ಯಾವುದು ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದು ರಾಧಾ ಮೋಹನದಾಸ್‌‍ ಅಗರ್ವಾಲ್‌ ಹೇಳಿದ್ದಾರೆ.

ದೇಶಾದ್ಯಂತ ಭಾರೀ ಕುತೂಹಲ ಮತ್ತು ಚರ್ಚೆಗೆ ಕಾರಣವಾಗಿದ್ದ ವಕ್‌್ಫ (ತಿದ್ದುಪಡಿ) ಮಸೂದೆ, ರಾಜ್ಯಸಭೆಯಲ್ಲೂ ಆಂಗೀಕಾರಗೊಂಡಿದೆ. ಆ ಮೂಲಕ, ಸಂಸತ್ತಿನ ಎರಡೂ ಸದನದಲ್ಲಿ ಬಿಲ್‌ ಪಾಸ್‌‍ ಆಗಿದೆ. ಇನ್ನು, ರಾಷ್ಟ್ರಪತಿಯವರ ಅಂಕಿತ ಬೀಳುತ್ತಿದ್ದಂತೆಯೇ ಮಸೂದೆ ಅಧಿಕೃತವಾಗಲಿದೆ.

ಕರ್ನಾಟಕದಲ್ಲಿ ವಕ್ಫ್ ಆಸ್ತಿಯನ್ನು ಸಾಕಷ್ಟು ನಾಯಕರು, ಅದರಲ್ಲಿ ಬಹುತೇಕ ಕಾಂಗ್ರೆಸ್‌‍ ನಾಯಕರು ಎಂದು ಬಿಜೆಪಿ ಸತತವಾಗಿ ಆರೋಪ ಮಾಡುತ್ತಾ ಬರುತ್ತಿತ್ತು. ಬಿಜೆಪಿಯ ನಾಯಕ ಮತ್ತು ಹಮೀರ್ಪುರ್‌ ಲೋಕಸಭಾ ಕ್ಷೇತ್ರದ ಸಂಸದ ಅನುರಾಗ್‌ ಠಾಕೂರ್‌, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಮೇಲೂ ಆರೋಪ ಮಾಡಿದ್ದರು.

 
ಅಗರ್ವಾಲ್‌ ಹೇಳಿದ ಹೆಸರುಗಳಿವು
1.ಖಮರುಲ್‌ ಇಸ್ಲಾಂ – ಮಾಜಿ ಸಚಿವ
2.ನರಸಿಂಗರಾವ್‌ ಸೂರ್ಯವಂಶಿ – ಮಾಜಿ ಸಂಸದ
3.ಸಿ.ಎಂ.ಇಬ್ರಾಹಿಂ – ಮಾಜಿ ಕೇಂದ್ರ ಸಚಿವ
4.ಕೆ.ರೆಹಮಾನ್‌ ಖಾನ್‌ – ಮಾಜಿ ಕೇಂದ್ರ ಸಚಿವ
5.ಅಬ್ದುಲ್ಲಾ ಸಲೀಂ – ವಕ್ಫ್ ಬೋರ್ಡ್‌ ಅಧಿಕಾರಿ
6.ಎನ್‌.ಎ.ಹ್ಯಾರೀಸ್‌‍ – ಹಾಲೀ ಶಾಸಕ
7.ಎಂ.ಎ.ಖಲೀದ್‌ – ಮಾಜಿ ಅಧಿಕಾರಿ
8.ಮಮ್ತಾಜ್‌ ಅಹದ್‌ ಖಾನ್‌ – ಅಧ್ಯಕ್ಷರು
9.ಮೊಹಮದ್‌ ಸನುಲ್ಲಾ – ಐಎಎಸ್‌‍ ಅಧಿಕಾರಿ
10.ಸಿಂಧೂಸ್‌‍ ಗಿರಿ – ಮಾಜಿ ಸಚಿವ
11.ಎಂ.ಎಸ್‌‍. ಬಾಷಾ – ಐಎಂಐಸಿಎಸ್‌‍
12.ಖನೀಜಾ ಫಾತಿಮಾ – ಹಾಲೀ ಶಾಸಕಿ
13.ಸಿ.ಕೆ.ಜಾಫರ್‌ ಷರೀಫ್‌ – ಮಾಜಿಕೇಂದ್ರಸಚಿವ

 


   
      
      
      
      
   

Publisher: ಕನ್ನಡ ನಾಡು | Kannada Naadu

Login to Give your comment
Powered by