ಬೆಂಗಳೂರು: ಮಖಾನ ಬೆಳೆ ಹಾಗೂ ಅದರಿಂದ ತಯಾರಿಸುವ ತಿನಿಸನ್ನು ರಾಜ್ಯ, ದೇಶ ಹಾಗೂ ವಿದೇಶಗಳಲ್ಲೂ ಪರಿಚಯಿಸುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಮಖಾನ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಹಾರದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ತಿಳಿಸಿದರು.
ಅವರು ರಂದು ಅರಮನೆ ಮೈದಾನದ ಕಿಂಗ್ಸ್ ಕೋರ್ಟ್ ನಲ್ಲಿ ಬಿಹಾರ ಸರ್ಕಾರ ಹಾಗೂ ಭಾರತೀಯ ವಾಣಿಜ್ಯ ಮಂಡಳಿ ಸಹಯೋಗದಲ್ಲಿ 2 ದಿನಗಳ ಕಾಲ ಹಮ್ಮಿಕೊಳ್ಳಲಾದ 'ಮಖಾನ ಮಹೋತ್ಸವ'ವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಶೇ 80 ರಷ್ಟು ಮಖಾನವನ್ನು ಬಿಹಾರದಲ್ಲಿ ಬೆಳೆಯಲಾಗುತ್ತದೆ. ಈ ಬೆಳೆ ಅಲ್ಲಿನ ರೈತರಿಗೆ ಮಾರುಕಟ್ಟೆ ಕಲ್ಪಿಸುತ್ತದೆ. ಬಿಹಾರ ಸರ್ಕಾರ ಮಖಾನ ಬೆಳೆಗಾರರಿಗೆ ಶೇ75 ರ ಸಬ್ಸಿಡಿ ಸಹ ನೀಡುತ್ತಿದೆ. ಇದರಲ್ಲಿ ಹೆಚ್ಚು ನಾರು ಹಾಗೂ ಪೆÇ್ರೀಟೀನ್ ಅಂಶವಿರುವುದರಿಂದ ತಿನಿಸು, ಸಿರಿಧಾನ್ಯ, ಖೀರು ಅಥವಾ ಇನ್ನಾವುದೇ ರೂಪದಲ್ಲಿ ತಯಾರಿಸಿ ಸೇವಿಸಬಹುದು. ಮಖಾನ ಲಾಭಗಳ ಕುರಿತು ಸಂಶೋಧನೆ ಸಹ ನಡೆಯುತ್ತಿದೆ. ಜನರು ಇದರ ಬಗ್ಗೆ ಹೆಚ್ಚು ಒಲವು ತೋರಿಸಿ ಇದರ ತಿನಿಸುಗಳನ್ನು ಸೇವಿಸಬೇಕು ಎಂದರು
ಕಾರ್ಯಕ್ರಮದಲ್ಲಿ ಬಿಹಾರದ ಕೃಷಿ ಸಚಿವರಾದ ಮಂಗಲ್ ಪಾಂಡೆ ಮಾತನಾಡಿ, ದಕ್ಷಿಣ ಭಾರತದ ರಾಜ್ಯಗಳಲ್ಲಿ ಮಖಾನ ಬೀಜ, ಬೆಳೆ, ತಿನಿಸು ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಈ ಖಾದ್ಯಗ ಬಗ್ಗೆ ಜನರಿಗೆ ಮಾಹಿತಿಯನ್ನು ನೀಡಲು ಮಖಾನ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಮಖಾನ ತಿನ್ನುವುದರಿಂದ ದೇಹಕ್ಕೆ ಪೆÇೀಷಕಾಂಶ ಸಿಗುವದರ ಜೊತೆಗೆ ಕ್ಯಾನ್ಯರ್ ರೋಗ ಸಹ ತಡೆಯಬಹುದಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಇದರ ಬೆಲೆ ಮೂರು ಪಟ್ಟು ಏರಿಕೆಯಾಗಿದೆ .ಪ್ರಸ್ತುತ ಇದು ಕೆ.ಜಿಗೆ ರೂ 1800-2000 ರವರೆಗೆ ಮಾರಾಟವಾಗುತ್ತಿದೆ. ಇದರ ಮಾರುಕಟ್ಟೆ ವಿಸ್ತರಿಸುವ ನಿಟ್ಟಿನಲ್ಲಿ ಮಖಾನವನ್ನು ಎಲ್ಲೆಡೆ ಪ್ರಚುರ ಪಡೆಸುವ ಅವಶ್ಯಕತೆ ಇದೆ ಎಂದರು
ಕಾರ್ಯಕ್ರಮದ ಅಂಗವಾಗಿ ಮಖಾನ ಬೀಜ,ಇದರ ತಿನಿಸುಗಳ ಪ್ರದರ್ಶನ ಹಾಗೂ ಮಾರಾಟ ಕಲ್ಪಿಸಲಾಗಿತ್ತು. ಈ ಸಂದರ್ಭದಲ್ಲಿ ಮಖಾನ ಕುರಿತು 2.4 ಕೋಟಿಯ ಪ್ರಥಮ ಒಡಂಬಡೆಕೆ ಸಹ ಮಾಡಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಬಿಹಾರದ ಕೃಷಿ ಇಲಾಖೆ ಕಾರ್ಯದರ್ಶಿ ಸಂಜಯ್ ಕುಮಾರ್ ಅಗರ್ವಾಲ್, ತೋಟಗಾರಿಕೆ ನಿರ್ದೇಶಕ ಅಭಿμÉೀಕ್ ಕುಮಾರ್, ರಿಪಬ್ಲಕ್ ಆಫ್ ಅರ್ಮೇನಿಯಾದ ಕೌನ್ಸಿಲ್ ಜನರಲ್ ಶಿವಕುಮಾರ್ ಈಶ್ವರನ್,, ಬೆಂಗಳೂರು ಕೈಗಾರಿಕೆ ಮತ್ತು ವಾಣಿಜ್ಯ ಮಂಡಳಿ ಉಪಾಧ್ಯಕ್ಷರಾದ ಕುಮಾರ್ ರವಿ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
Publisher: ಕನ್ನಡ ನಾಡು | Kannada Naadu