ಉಡುಪಿ: ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿಕೊಂಡ ಮಾನ್ಯ ದಿನಕರ ಹೇರೂರು ಅವರಿಗೆ ಕರ್ನಾಟಕ ರಕ್ಷಣಾ ಶಾಲು ಹಾಕಿ ನೀಡಲಾಯಿತು.ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿಯವರು ಶಾಲು ಹೊಂದಿಸಿ ಹೂಗುಚ್ಛ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಉಡುಪಿ ಕರಾವೇ ಜಿಲ್ಲಾಧ್ಯಕ್ಷ ಸುಜಯ್ ಪೂಜಾರಿಯವರು, ಬಡಜನರ ಯಾವುದೇ ಕೆಲಸ ಕಾರ್ಯವಿದ್ದರೇ ರಾಜಕೀಯ ರಹಿತ ಅವರ ಕೆಲಸವನ್ನು ಮಾಡಬೇಕು. ನಿಮ್ಮಿಂದ ಹಲವಾರು ಕೆಲಸ ಕಾರ್ಯಗಳು ಉಡುಪಿ ನಗರದಲ್ಲಿ ಆಗಬೇಕು ಎಂದು ತಿಳಿಸಿದರು.
ದಿನಕರ ಹೇರೂರವರು ಕನ್ನಡದ ಬಗ್ಗೆ ತುಂಬಾ ಅಭಿಮಾನ ಇದೆ. ಹಾಗೆ ರಾಜ್ಯ ಅಧ್ಯಕ್ಷರಾದ ಟಿ ಎ ನಾರಾಯಣಗೌಡ್ರ ಮೇಲೆ ಗೌರವ ಇದೆ ಎಂದು ಅವರ ಹಲವಾರು ವಿಷಯಗಳನ್ನು ಈ ಮೂಲಕ ತಿಳಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಗೀತಾ ಪಾಂಗಾಳ,ಜಿಲ್ಲಾ ಉಪಾಧ್ಯಕ್ಷರಾದ ಸಂತೋಷ್ ಕುಲಾಲ್, ಜಿಲ್ಲಾ ಮಹಿಳಾ ಉಪಾಧ್ಯಕ್ಷರಾದ ದೇವಕಿ ಬಾರ್ಕೂರ್, ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿಯಾದ ಜ್ಯೋತಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾದ , ಆಲ್ಫೋನ್ಸ್ ಬ್ರಹ್ಮವಾರ ತಾಲೂಕು ಅಧ್ಯಕ್ಷರಾದ ಸ್ಟಾನಿ ಡಿಸೋಜಾ, ಜಿಲ್ಲಾ ಸಾಂಸ್ಕೃತಿಕ ಕಾರ್ಯದರ್ಶಿಯಾದ ಕೃಷ್ಣಕುಮಾರ್, ಜಿಲ್ಲಾ ಮಹಿಳಾ ಜಾಲತನ ಸಂಚಾಲಕಿ ರಶ್ಮಿ, ಜಿಲ್ಲಾ ಮಹಿಳಾ ಕಾರ್ಯದರ್ಶಿ ಚಂದ್ರಕಲಾ, ಜಿಲ್ಲಾ ಮಹಿಳಾ ಸಾಂಸ್ಕೃತಿಕ ಕಾರ್ಯದರ್ಶಿ ಆಶಾ, ಜಿಲ್ಲಾ ಸದಸ್ಯರಾದ ಜ್ಯೋತಿ ಪೂಜಾರಿ ಉಪಸತ್ತಿದ್ದರು..
Publisher: ಕನ್ನಡ ನಾಡು | Kannada Naadu