CreamA Cream article
Article

ಮಲೆನಾಡು ಪ್ರದೇಶಾಭಿವೃದ್ಧಿ  ಮಂಡಳಿ ವ್ಯಾಪ್ತಿಗೆ ಬರುವ ಎಲ್ಲಾ ಕ್ಷೇತ್ರಗಳಿಗೆ ಹೆಚ್ಚುವರಿ ಅನುದಾನಕ್ಕೆ ಶಿಫಾರಸ್ಸು

ಕನ್ನಡ ನಾಡು

 

ಬೆಂಗಳೂರು : ಮಲೆನಾಡು ಪ್ರದೇಶಾಭಿವೃದ್ಧ ಮಂಡಳಿ ವ್ಯಾಪ್ತಿಗೆ ಬರುವ ಎಲ್ಲಾ ಕ್ಷೇತ್ರಗಳಿಗೆ ಪ್ರಸಕ್ತ ಸಾಲಿನಲ್ಲಿ ನಿಗದಿಯಾಗಿದ್ದ ರೂ. 35.00ಲಕ್ಷಗಳ ಬದಲು ರೂ. 100.00ಲಕ್ಷಗಳನ್ನು 2025-26 ಸಾಲಿನ ಆಯವ್ಯಯದಲ್ಲಿ ನಿಗದಿಪಡಿಸಲು  ಶಿಫಾರಸ್ಸು ಮಾಡಲಾಗಿದೆ ಎಂದು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವ  ಡಿ.ಸುಧಾಕರ್ ತಿಳಿಸಿದರು.

ಇಂದು ಕೊಳ್ಳೇಗಾಲ ಕ್ಷೇತ್ರದ ಶಾಸಕರಾದ ಕೃಷ್ಣಮೂರ್ತಿ ಎ.ಆರ್ ಇವರ ಪ್ರಶ್ನೆಗೆ ಉತ್ತರಿಸಿದ ಸಚಿವರು ಯಳಂದೂರು ತಾಲ್ಲೂಕು ಪ್ರದೇಶಾಭಿವೃದ್ಧಿ ಮಂಡಳಿ ವ್ಯಾಪ್ತಿಗೆ ಸೇರುವ ಎಲ್ಲಾ ಲಕ್ಷಣಗಳನ್ನು ಹೊಂದಿರುವುದನ್ನು ಪರಿಶೀಲಿಸಿ ಅಂದರೆ ವಾರ್ಷಿಕ ಮಳೆ, ವಾಡಿಕೆ, ಮಳೆ, ಅರಣ್ಯ ಪ್ರದೇಶ, ಭೂಮಿಯ ತೇವಾಂಶ ಮುಂತಾದ ಅಂಶಗಳನ್ನು ಅವಲೋಕಿಸಿ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ ಸೂಕ್ತ ನಿರ್ಣಯ ಕೈಗೊಂಡ ನಂತರ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ ವ್ಯಾಪ್ತಿಗೆ ಸೇರಿಸಲು ಕ್ರಮ ವಹಿಸಲಾಗುವುದು. ಅಲ್ಲದೇ ಅನುದಾನವನ್ನು ರೂ. 100.00 ಲಕ್ಷಗಳಿಗೆ ಹೆಚ್ಚಿಸಲು ಶಿಫಾರಸ್ಸು ಮಾಡಲಾಗಿದೆ ಎಂದು ತಿಳಿಸಿದರು.

Read More